ಜೂಗೆ ಹೋಗುವಾಗ ದಾರಿಯಲ್ಲಿ
ತಿಮ್ಮ ಸ್ನೇಹಿತನಿಗೆ ಬುದ್ಧಿ ಹೇಳುತ್ತಿದ್ದ:
"ಹುಡುಗಿ ನೋಡಲು ಚೆನ್ನಿಲ್ಲ ಎಂದಮಾತ್ರಕ್ಕೆ
ನೀನು ಮದುವೆಗೆ ಒಪ್ಪದಿದ್ದುದು ಸರಿಯಲ್ಲ;
ಅವಳೂ ಮನುಷ್ಯಳಲ್ಲವೆ?
ಅಂದ ಚೆಂದಕೆ ಮಾರುಹೋಗುವುದು ಮೂರ್ಖರ ಲಕ್ಷಣ!"
ಸ್ನೇಹಿತ ಯೋಚಿಸುತ್ತಿದ್ದ.
ಗರಿಗೆದರಿದ ನವಿಲ ನರ್ತನವ ನೋಡಿ ಸ್ನೇಹಿತನೆಂದ:
"ಕೆಲ ದೇಶಗಳಲ್ಲಿ ಇದರ ಮಾಂಸವನ್ನು ತಿನ್ನುವರಂತೆ!"
"ಇಷ್ಟು ಸುಂದರವಾಗಿರುವುದನ್ನು ಕಡಿದು ತಿನ್ನಲು
ಮನಸ್ಸು ಬರುವುದಾದರೂ ಹೇಗೆ" ಎಂದ ತಿಮ್ಮ.
ವಾಪಾಸಾಗುವಾಗ ಊಟಕ್ಕೆ ಹೋಟಲಿಗೆ ಹೋದಾಗ
ತಿಮ್ಮ ಮಾಣಿಗೆ ಚಿಕನ್ ಬಿರಿಯಾನಿ ತರಲು ಹೇಳಿದ.
ಸ್ನೇಹಿತ ಯೋಚಿಸುತ್ತಿದ್ದ.
2009/08/24
2009/08/23
ಸಂಯಮ
ಲಿಫ್ಟಿನಲ್ಲಿ ಬಂಧಿತ; ಜೊತೆಗೆ ಐವತ್ತರ ಆಸುಪಾಸಿನ ಆಸಾಮಿ
ಕಾಲು ಗಂಟೆಯೊಳಗೆ ಆಫೀಸಿನಲ್ಲಿ ಮೀಟಿಂಗಿಗೆ ಹೋಗದಿದ್ದರೆ
ಕೆಲಸ ಹೋಗುವುದಂತೂ ಖಂಡಿತ
ಬಾಗಿಲ ತೆಗೆಯಲು ನಾನು ಕಷ್ಟಪಡುತ್ತಿದ್ದರೆ
ಅವರು ಅಲ್ಲೇ ಕೊಳಕು ಲಿಫ್ಟಿನಲ್ಲಿ ಕುಳಿತರು
ಕಣ್ಣು ಕೆಂಪಾಗಿದೆ, ಧ್ವನಿ ಹಿಡಿತದಲ್ಲಿಲ್ಲ ... ಬೆಳಗ್ಗೆಯೇ ಎಣ್ಣೆಯೆ?
ಹಣೆಯಲ್ಲಿ ಕುಂಕುಮ ಬೇರೇ; ಹಿಪೋಕ್ರಿಟ್ಸ್!
ವಾಚ್ಮನ್ ಬಂದು ಯಾರಿಗೋ ಕರೆ ಮಾಡಿದ; ಸರಿಮಾಡಲು ಬರುವರಂತೆ.
ಇದ್ದ ಕೆಲಸವೂ ಹೋಯಿತಲ್ಲ ಎಂದು ತನುಮನಗಳಲ್ಲಿ ದುಃಖ-ಸಿಟ್ಟು
ಅವರೋ "ತಾಳ್ಮೆಯಿರಲಿ; ಚಿಂತಿಸಬೇಡ, ದೇವರಿದ್ದಾನೆ!" ಎನ್ನುತ್ತಿರುವರು
ಕುಡುಕರಿಗೇನು ಗೊತ್ತು ಸಮಯದ ಮಹತ್ವ
ಒಂದು ಗಂಟೆ ತರುವಾಯು ಬಿಡುಗಡೆ; "ಡ್ರಾಪ್ ಬೇಕಾ?" ಎಂದು ಕೇಳಿದೆ
ವಿನಾಯಕ ಆಸ್ಪತ್ರೆಯ ಬಳಿ ಇಳಿಯುವಾಗ ಹೇಳಿದರು:
ಪೂಜೆ ಮಾಡುವಾಗ ಕರೆ ಬಂದಿತ್ತಂತೆ, ಮಗನಿಗೆ ಆಕ್ಸಿಡೆಂಟ್ ಆಗಿದೆಯೆಂದು
ಕಾಲು ಗಂಟೆಯೊಳಗೆ ಆಫೀಸಿನಲ್ಲಿ ಮೀಟಿಂಗಿಗೆ ಹೋಗದಿದ್ದರೆ
ಕೆಲಸ ಹೋಗುವುದಂತೂ ಖಂಡಿತ
ಬಾಗಿಲ ತೆಗೆಯಲು ನಾನು ಕಷ್ಟಪಡುತ್ತಿದ್ದರೆ
ಅವರು ಅಲ್ಲೇ ಕೊಳಕು ಲಿಫ್ಟಿನಲ್ಲಿ ಕುಳಿತರು
ಕಣ್ಣು ಕೆಂಪಾಗಿದೆ, ಧ್ವನಿ ಹಿಡಿತದಲ್ಲಿಲ್ಲ ... ಬೆಳಗ್ಗೆಯೇ ಎಣ್ಣೆಯೆ?
ಹಣೆಯಲ್ಲಿ ಕುಂಕುಮ ಬೇರೇ; ಹಿಪೋಕ್ರಿಟ್ಸ್!
ವಾಚ್ಮನ್ ಬಂದು ಯಾರಿಗೋ ಕರೆ ಮಾಡಿದ; ಸರಿಮಾಡಲು ಬರುವರಂತೆ.
ಇದ್ದ ಕೆಲಸವೂ ಹೋಯಿತಲ್ಲ ಎಂದು ತನುಮನಗಳಲ್ಲಿ ದುಃಖ-ಸಿಟ್ಟು
ಅವರೋ "ತಾಳ್ಮೆಯಿರಲಿ; ಚಿಂತಿಸಬೇಡ, ದೇವರಿದ್ದಾನೆ!" ಎನ್ನುತ್ತಿರುವರು
ಕುಡುಕರಿಗೇನು ಗೊತ್ತು ಸಮಯದ ಮಹತ್ವ
ಒಂದು ಗಂಟೆ ತರುವಾಯು ಬಿಡುಗಡೆ; "ಡ್ರಾಪ್ ಬೇಕಾ?" ಎಂದು ಕೇಳಿದೆ
ವಿನಾಯಕ ಆಸ್ಪತ್ರೆಯ ಬಳಿ ಇಳಿಯುವಾಗ ಹೇಳಿದರು:
ಪೂಜೆ ಮಾಡುವಾಗ ಕರೆ ಬಂದಿತ್ತಂತೆ, ಮಗನಿಗೆ ಆಕ್ಸಿಡೆಂಟ್ ಆಗಿದೆಯೆಂದು
2009/08/21
ಅಡಗೂಲಜ್ಜಿ ಕಥೆ
ವೀರಕೇಸರಿಯ ಪ್ರೇಮಕಥೆಯ ಕೇಳಿ
ಕರುಣೆಯಿಂದಲಿ ಮರುಗಿದನು
ವರವ ರೂಪದಲಿ ಮಂತ್ರವೊಂದನು ಹೇಳಿ
ಹಾರುವ ಕುದುರೆಯೊಂದ ಕೊಟ್ಟನು
ಏಳು ಸಾಗರವ ದಾಟಿ, ಏಳು ಪರ್ವತಗಳನೇರಿ
ಧೂಳನೆಬ್ಬಿಸುತ ಸಾಗಿತು ಬಿಳಿಕುದುರಿ
ಚಳಿಮಳೆಯ, ಉರಿಬಿಸಿಲ ಲೆಕ್ಕಿಸದೆ
ಅಳುಕಿಲ್ಲದೆ ಓಡಿತು ಮುಂದೆ ಮುಂದೆ
ಕಟ್ಟಕಡೆಗೊಂದು ದಿನ ಮುಸ್ಸಂಜೆ ಹೊತ್ತಿನಲಿ
ದಟ್ಟಡವಿಯೊಂದ ತಲುಪಿದ ಕೇಸರಿ
ಪುಟ್ಟ ಗುಹೆಗೆ ಅಲ್ಲೊಂದು ದಾರಿ
ಅಟ್ಟಹಾಸದ ನಗುವು ಕೇಳಿಸಿತಲ್ಲಿ
ನಿದ್ದೆ ಮಾಡಿ ಅಜ್ಜಿ ಗೊರಕೆ ಹೊಡೆಯುತ್ತಿದ್ದಳು
ಸದ್ದಿಲ್ಲದೆ ಕಥೆಯ ನಿಲ್ಲಿಸಿ ಮುಸುಕೆಳೆದಳು ಮೊಮ್ಮಗಳು
ಕರುಣೆಯಿಂದಲಿ ಮರುಗಿದನು
ವರವ ರೂಪದಲಿ ಮಂತ್ರವೊಂದನು ಹೇಳಿ
ಹಾರುವ ಕುದುರೆಯೊಂದ ಕೊಟ್ಟನು
ಏಳು ಸಾಗರವ ದಾಟಿ, ಏಳು ಪರ್ವತಗಳನೇರಿ
ಧೂಳನೆಬ್ಬಿಸುತ ಸಾಗಿತು ಬಿಳಿಕುದುರಿ
ಚಳಿಮಳೆಯ, ಉರಿಬಿಸಿಲ ಲೆಕ್ಕಿಸದೆ
ಅಳುಕಿಲ್ಲದೆ ಓಡಿತು ಮುಂದೆ ಮುಂದೆ
ಕಟ್ಟಕಡೆಗೊಂದು ದಿನ ಮುಸ್ಸಂಜೆ ಹೊತ್ತಿನಲಿ
ದಟ್ಟಡವಿಯೊಂದ ತಲುಪಿದ ಕೇಸರಿ
ಪುಟ್ಟ ಗುಹೆಗೆ ಅಲ್ಲೊಂದು ದಾರಿ
ಅಟ್ಟಹಾಸದ ನಗುವು ಕೇಳಿಸಿತಲ್ಲಿ
ನಿದ್ದೆ ಮಾಡಿ ಅಜ್ಜಿ ಗೊರಕೆ ಹೊಡೆಯುತ್ತಿದ್ದಳು
ಸದ್ದಿಲ್ಲದೆ ಕಥೆಯ ನಿಲ್ಲಿಸಿ ಮುಸುಕೆಳೆದಳು ಮೊಮ್ಮಗಳು
2009/08/19
ಉಡುಗೊರೆಯ ನೆನಪು
ಹನ್ನೆರಡು ವರ್ಷಗಳ ಹಿಂದೆ ಸೋದರಮಾವ ವಿದೇಶಕ್ಕೆ ಹೊರಟಾಗ
ಅಳಿಯನಿಗೆ ನಾಲ್ಕು ವರುಷ ತುಂಬಿತ್ತಷ್ಟೆ
ದೂರವಾದರೇನು, ಮಾವನಿಗೆ ಅಳಿಯನ ಮೇಲೆ ಮಮತೆ
ಪ್ರತಿ ವರುಷ ಅವನ ಹುಟ್ಟುಹಬ್ಬಕ್ಕೆ
ತಪ್ಪದೇ ತಲುಪುತ್ತಿತ್ತು ಬಣ್ಣ ಬಣ್ಣದ ಉಡುಗೊರೆ:
ತುತ್ತೂರಿ, ಪೆನ್ನು, ವಾಚು, ಗೇಮು ... ಇತ್ಯಾದಿ
ಅಳಿಯನಿಗೆ ಉಡುಗೊರೆ ಕಂಡಾಕ್ಷಣ
ಕುಣಿದು ಕುಪ್ಪಳಿಸುವಷ್ಟು ಸಂತೋಷ
ಆದರೆ ಹತ್ತು ದಿನಗಳ ನಂತರ
ಅವನೆಲ್ಲೋ ಉಡುಗೊರೆ ಇನ್ನೆಲ್ಲೋ
ಮಾವ ಬರುವರೆಂದು ಕೇಳಿ ಅಳಿಯ ಕೆನ್ನೆ ಮುಟ್ಟಿಕೊಂಡ
ಏಕೆಂದು ಕೇಳಿದರೆ ನುಡಿದ:
"ಅವರೆಂದರೆ ನನಗೆ ನೆನಪಿಗೆ ಬರುವುದು
ಹನ್ನೆರಡು ವರುಷಗಳ ಹಿಂದೆ ಅವರು ಕೊಟ್ಟ ಏಟು ಮಾತ್ರ"
ಅಳಿಯನಿಗೆ ನಾಲ್ಕು ವರುಷ ತುಂಬಿತ್ತಷ್ಟೆ
ದೂರವಾದರೇನು, ಮಾವನಿಗೆ ಅಳಿಯನ ಮೇಲೆ ಮಮತೆ
ಪ್ರತಿ ವರುಷ ಅವನ ಹುಟ್ಟುಹಬ್ಬಕ್ಕೆ
ತಪ್ಪದೇ ತಲುಪುತ್ತಿತ್ತು ಬಣ್ಣ ಬಣ್ಣದ ಉಡುಗೊರೆ:
ತುತ್ತೂರಿ, ಪೆನ್ನು, ವಾಚು, ಗೇಮು ... ಇತ್ಯಾದಿ
ಅಳಿಯನಿಗೆ ಉಡುಗೊರೆ ಕಂಡಾಕ್ಷಣ
ಕುಣಿದು ಕುಪ್ಪಳಿಸುವಷ್ಟು ಸಂತೋಷ
ಆದರೆ ಹತ್ತು ದಿನಗಳ ನಂತರ
ಅವನೆಲ್ಲೋ ಉಡುಗೊರೆ ಇನ್ನೆಲ್ಲೋ
ಮಾವ ಬರುವರೆಂದು ಕೇಳಿ ಅಳಿಯ ಕೆನ್ನೆ ಮುಟ್ಟಿಕೊಂಡ
ಏಕೆಂದು ಕೇಳಿದರೆ ನುಡಿದ:
"ಅವರೆಂದರೆ ನನಗೆ ನೆನಪಿಗೆ ಬರುವುದು
ಹನ್ನೆರಡು ವರುಷಗಳ ಹಿಂದೆ ಅವರು ಕೊಟ್ಟ ಏಟು ಮಾತ್ರ"
Subscribe to:
Comments (Atom)