2009/07/31

ಮುನ್ನುಡಿ

ಹಿಂದಿನ ಅನುಭವ, ಇಂದಿನ ವಿಚಾರ, ಮುಂದಿನ ಕನಸು;
ಜೊತೆಗೆ ಸುದ್ಧಿ-ಸಮಾಚಾರ, ಸ್ವಲ್ಪ ಸಿನೆಮಾ, ಆಟ, ತಿರುಗಾಟ ಇತ್ಯಾದಿ;
ಎಲ್ಲಾ ಬರೆಯೋಣವೆಂದರೆ ... ಸಮಯವೇನೋ ಇದೆ
ಆದರೆ ಸಂಯಮದ ಕೊರತೆ.
ಬರೆಯದಿದ್ದರೆ ಮನಸ್ಸಿಗೆ ಸಮಾಧಾನವಿಲ್ಲ
ಕೆಲಸವೊಂದು ಅರ್ಧಕ್ಕೆ ನಿಂತಂತೆ.

ಅದಕ್ಕೊಂದು ಉಪಾಯ: ಬರವಣಿಗೆಯಲ್ಲಿ
ವಿಷಯವಿರಬೇಕು, ವರ್ಣನೆಯಿರಬಾರದು;
ವಿಚಾರವಿರಬೇಕು, ಹರಟೆಯಿರಬಾರದು;
ತಿರುಳಿರಬೇಕು, ವಿವರಗಳಿರಬಾರದು;
ವೈಶಿಷ್ಟ್ಯವಿರಬೇಕು, ವೈಚಿತ್ರ್ಯವಿರಬಾರದು;
ಭಾವನೆಗಳ ಸ್ಥೂಲ ರೂಪವಿರಬೇಕು, ಭಾವುಕತೆಯಿರಬಾರದು;

ಹೆಚ್ಚೆಂದರೆ ಹದಿನಾಲ್ಕು ಸಾಲಿರಬೇಕು, ಅದಕ್ಕಿಂತ ಹೆಚ್ಚಿರಬಾರದು;
ಇದೇ ಪುಟಾಣಿ ಬರಹ.